PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕು ಹಿರೇಮುಕರ್ತಿನಾಳ ಗ್ರಾಮದ ಗಿರಿಯಪ್ಪ ತಂದೆ ಹನುಮಂತ ಕೊಂಡಿಕಾರ (25) ಎಂಬ ಯುವಕ ಕೆಲಸದ ನಿಮಿತ್ಯ ಹೊರಗಡೆ ಹೋದವನು ಕಾಣೆಯಾಗಿದ್ದು,  ಯುವಕನ ಪತ್ತೆಗೆ ಸಹಕರಿಸುವಂತೆ ತಾವರಗೇರಾ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
 ಯುವಕನು ಕಳೆದ ಮಾ.01 ರಂದು ಅದೇ ಗ್ರಾಮದ ಶರಣಮ್ಮ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದು, ಮಾ.15 ರಂದು ದುಡಿದುಕೊಂಡು ಬರುತ್ತೇನೆಂದು ಮನೆಯಿಂದ ಹೋದವನು ವಾಪಸ್ ಮನೆಗೆ ಬಾರದೇ   ಕಾಣೆಯಾಗಿರುತ್ತಾನೆ.  ಕಾಣೆಯಾದ ಯುವಕನ ವಿವರ ಇಂತಿದೆ ಜಾತಿ: ವಾಲ್ಮೀಕಿ, ಕನ್ನಡ ಭಾಷೆ ಮಾತನಾಡುತ್ತಾನೆ, ಎತ್ತರ 5’ 5’, 5ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದಾನೆ. ಕೋಲು ಮುಖ, ಸಾದಾ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ.  ಬಿಳಿ ಮತ್ತು ಬೂದು ಬಣ್ಣಗಳ ಚೆಕ್ಸ್ ತುಂಬು ತೋಳಿನ ಶರ್ಟು, ಬೂದು ಬಣ್ಣದ ಪ್ಯಾಂಟ್‍ನ್ನು ಧರಿಸಿದ್ದಾನೆ.  ಈ ಚಹರೆಯುಳ್ಳ ಯುವಕನ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ತಾವರಗೇರಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಸ್.ಪಿ. ಕಛೇರಿ ಕೊಪ್ಪಳ 9480803701, 08539-230111, ಡಿ.ಎಸ್.ಪಿ. ಗಂಗಾವತಿ 9480803721, 08536-230853, ಸಿ.ಪಿ.ಐ ಕುಷ್ಟಗಿ 9480803732, 08536-267033 ಹಾಗೂ ಪಿ.ಎಸ್.ಐ. ತಾವರಗೇರಾ 9480803758, 08536-275322 ಈ ದೂರವಾಣಿಗಳಿಗೆ ಸಂಪರ್ಕಿಸುವಂತೆ   ತಿಳಿಸಿದೆ.

Advertisement

0 comments:

Post a Comment

 
Top