ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಗಳೊಂದಿಗೆ ಪಿಯುಸಿಎಲ್ನ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಕಾರ್ಯದರ್ಶಿ ಅಲ್ಲಾಗಿರಿರಾಜ್, ಪಿಯುಸಿಎಲ್ನ ಹಿರಿಯ ಆಜೀವ ಸದಸ್ಯ ಭಾರದ್ವಾಜ್,ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೆಕಲ್, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಯೇಸಪ್ಪ ಮತ್ತೀತರು ಉಪಸ್ಥಿತರಿದ್ದರು.
ಭೂ-ಮಾಲೀಕರ ಬೆದರಿಕೆ :
ನ್ಯಾಯಮೂರ್ತಿ ಸಿ.ಜಿ.ಹುನಗುಂದ ರವರು ಸವಳಕ್ಯಾಂಪ್ನಲ್ಲಿ ವಿಕ್ಷಿಸಿ ಹೋದ ನಂತರ ಭೂ-ಮಾಲೀಕರಾದ ಪಾಲರಾಮು ಮತ್ತು ಲಕ್ಷ್ಮೀನಾರಾಯಣರವರು ಯಾನಾದಿ ಜನಾಂಗದ ಮಹಿಳೆಯರನ್ನು ಅವಾಚ್ಯ ಶಬ್ಧಗಳಿಂದ ಬೈದು ಇಂತಹ ನ್ಯಾಯಮೂರ್ತಿಗಳು ಎಷ್ಟು ಜನ ಬಂದರೂ ನಿಮಗೆ ಸಹಾಯ ಮಾಡಲಾಗುವುದಿಲ್ಲ, ನೀವುಗಳು ನಮಗೆ ಹೊಂದಿಕೊಂಡರೆ ಮಾತ್ರ ಜೀವನ ಮಾಡುತ್ತೀರಿ ಇಲ್ಲದಿದ್ದಲ್ಲಿ ನಿಮಗೆ ಬಹಳ ಕಷ್ಟಗಳು ಬರುತ್ತವೆ ಎಂದು ಧಮಕಿ ಹಾಕಿದ್ದಾರೆ.
0 comments:
Post a Comment