PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಸರ್ಕಾರಿ ಅಂಗವಿಕಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಇಕ್ಬಾಲ್ ಅನ್ಸಾರಿ ಹೇಳಿದರು.
 ಅವರು ತಮ್ಮ ನಿವಾಸದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಸರ್ಕಾರಿ ಅಂಗವಿಕಲ ನೌಕರರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದರ ಜೊತೆಗೆ ಅವರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೆ ವಿನಾ ಕಾರಣಗಳನ್ನು ನೀಡಿ ಅಲೆದಾಡಿಸುವ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವುದು,ಅವರ ಬೇಡಿಕೆಗಳ ಇಡೇರಿಕೆಗಾಗಿ ಹೋರಾಟ ನೆಡಸಲಾಗುವದು.ಸರ್ಕಾರಿ ಅಂಗವಿಕಲ ನೌಕರರ ಸಂಘವು ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದೇ ರೀತಿಯಲ್ಲಿ ಕಾರ್ಯ ನಿರ್ವವಹಿಸಿ,ಅಂಗವಿಕಲ ನೌಕರರ ಜೊತೆಗೆ ನಿರುದ್ಯೋಗಿ ಅಂಗವಿಕಲ ನೌಕರರ ಬೇಡಿಕೆಗಳಿಗೆ ಸ್ಪಂದಿಸುವಂತೆ ತಿಳಿಸಿದರು.
  ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ಶಾಸಕರಾಗಿ ನೀವು ಆಯ್ಕೆಯಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದ್ದು ಸರ್ಕಾರಿ ಅಂಗವಿಕಲ ನೌಕರರ ಹಾಗೂ ನಿರುದ್ಯೋಗಿ ಅಂಗವಿಕಲ ನೌಕರರ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ನಮ್ಮೇಲ್ಲರ ಧ್ವನಿಯಾಗಿ,ಸಮಸ್ಯೆಗಳನ್ನು ಇಡೇರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಗಂಗಾವತಿ ತಾಲೂಕ ಅಧ್ಯಕ್ಷರಾದ ಬಿ.ಭೀಮಪ್ಪ,ಪ್ರಧಾನ ಕಾರ್ಯದರ್ಶಿ ಪರಶುರಾಮ ಮೂಲಂಗಿ,ಸಂಚಾಲಕರಾದ ಶ್ರೀನಿವಾಸ.ಯು.ನರಸಮ್ಮ,ಶಿಕ್ಷಕರಾದ ವೆಂಕಟೇಶ ಹೊಸಗೇರಿನ ಮುಂತಾದವರು ಹಾಜರಿದ್ದರು.

Advertisement

0 comments:

Post a Comment

 
Top