PLEASE LOGIN TO KANNADANET.COM FOR REGULAR NEWS-UPDATES


  ಕೇಂದ್ರ ರೈಲ್ವೆ ಸಚಿವ ಬನ್ಸಲ್ ಅವರು ಮಂಡಿಸಿದ ೨೦೧೩-೧೪ನೇ ಸಾಲಿನ ರೈಲ್ವೆ ಬಜೆಟ್ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕೊಪ್ಪಳ ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
  ರೈಲ್ವೆ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದ ಶಿವರಾಮಗೌಡ ಅವರು, ಈ ಬಾರಿಯ ರೈಲ್ವೆ ಬಜೆಟ್ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ತೀರಾ ನಿರಾಸೆಯನ್ನುಂಟುಮಾಡಿದೆ.  ಈ ಭಾಗಕ್ಕೆ ಹೊಸ ರೈಲು ಹಾಗೂ ಪ್ಯಾಸೆಂಜರ್ ರೈಲುಗಳ ಮಂಜೂರಾತಿ ನೀಡುವಂತೆ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದ್ದಾಗ್ಯೂ, ಕೇಂದ್ರ ಸಚಿವರು ಯಾವುದೇ ರೀತಿಯಲ್ಲಿ ಸ್ಪಂದಿಸದೆ, ಈ ಭಾಗದ ಜನರಿಗೆ ನಿರಾಸೆ ಮೂಡಿಸಿದ್ದಾರೆ.  ಮೆಹಬೂಬ್‌ನಗರ-ಮುನಿರಾಬಾದ್ ನೂತನ ರೈಲ್ವೆ ಕಾಮಗಾರಿ ತ್ವರಿತವಾಗಲು ಕನಿಷ್ಟ ೧೩೦ ಕೋಟಿ ರೂ. ಒದಗಿಸುವಂತೆ ವಿನಂತಿಸಿದ್ದರೂ, ಕೇವಲ ೩೦ ಕೋಟಿ ರೂ. ಅನುದಾನ ಒದಗಿಸುವದರಿಂದ, ಕಾಮಗಾರಿ ವಿಳಂಬವಾಗಲಿದೆ ಎಂದು ಸಂಸದ ಶಿವರಾಮಗೌಡ ಅವರು   ಅನಿಸಿಕೆ ವ್ಯಕ್ತಪಡಿಸಿದ್ದಾರೆ.

26 Feb 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top