PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಆ.೯ನಗರದ ಪ್ರತಿಭಾವಂತ ಛಾಯಾಚಿತ್ರಗ್ರಾಹಕ ಪ್ರಕಾಶ ಕಂದಕೂರ ಮತ್ತೊಮ್ಮೆ ರಾಜ್ಯಮಟ್ಟದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.ಬೆಂಗಳೂರಿನ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಏರ್ಪಡಿಸಿದ್ದ ಮೂರನೇ ರಾಷ್ಟ್ರ ಮಟ್ಟದ ಹಾಗೂ ನಾಲ್ಕನೇಯ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಂದಕೂರ ಈ ಸಾಧನೆ ಮಾಡಿದ್ದಾರೆ. ಅವರು ರಾಜ್ಯಮಟ್ಟದ ಸ್ಪರ್ಧೆಯ ನಮ್ಮ ಕರ್ನಾಟಕ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.ಕಳೆದ ಜನವರಿಯಲ್ಲಿ ಜರುಗಿದ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವ ಸಂದರ್ಭದಲ್ಲಿ ಅವರು ಸೆರೆಹಿಡಿದ ಅಪರೂಪದ  ಛಾಯಾಚಿತ್ರವು ತೀರ್ಪುಗಾರರ ಮೆಚ್ಚುಗೆ ಗಳಿಸಿ ಎರಡನೇ ಬಹುಮಾನ ಗಳಿಸಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಆ.೨೪ ರಂದು ಬೆಂಗಳೂರಿನಲಿ ಜರುಗಲಿದ್ದು ರಾಜ್ಯಪಾಲ ಹಂಸರಾಜ ಭಾರದ್ವಾಜ ಬಹುಮಾನ ನೀಡಿ ಗೌರವಿಸಲಿದ್ದಾರೆ. ಪ್ರಕಾಶ ಅವರ ಈ ಸಾಧನೆಗೆ ಜಿಲ್ಲಾ ತಿರುಳ್ಗನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಅಂಗಡಿ ಹಾಗೂ ಸಹಕಾರ್ಯದರ್ಶಿ ಮಂಜುನಾಥ ಡಿ.ಡೊಳ್ಳಿನ ಮತ್ತಿತರರು ಹರ್ಷವ್ಯಕ್ತಪಡಿಸಿದ್ದಾರೆ.
09 Aug 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top