ಇದಕ್ಕೂ ಮೊದಲು ಮಹೇಶ ಬಳ್ಳಾರಿಯವರ 'ಕತ್ತಲು' ಕಥಾವಾಚನ ಮಾಡಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ವಾಸುದೇವ ಕುಲಕರ್ಣಿ-ಬಿಸಿಲ ಧಗೆ, ಕುರುವತ್ತಿಗೌಡ್ರ- ವಿಶ್ವಶಾಂತಿ, ಬಸು ಚೌಡಕಿ-ಚುಟುಕು,ಓಕುಳಿ, ಶಾಂತಾದೇವಿ ಹಿರೇಮಠ- ತುಂಗಾ ಪಾನ, ಲಲಿತಾ ಭಾವಿಕಟ್ಟಿ- ಮರಭೂಮಿಗೆ ತಂಪನೆರೆದವರು, ನಟರಾಜ ಸವಡಿ-ಆಶಯ, ಒಲಿವನುಲಿ, ಶಾಂತು ಬಡಿಗೇರ- ಜೀವನಾಡಿ, ಕಂಬಾಳಿ ಮಠ- ೩೭೧ನೇ ಕಲಂ, ಡಾ.ರೇಣುಕಾ ಕರಿಗಾರ- ಹೂವು. ಭ್ರಮೆಗಳು, ಬಸವರಾಜ ಸಂಕನಗೌಡರ-ಜಡೆ,ಗಾಂಧಿ , ವಿಠ್ಠಪ್ಪ ಗೋರಂಟ್ಲಿ- ಕವಿಸತ್ತು ಕವಿತೆ ಉಳಿಯಬೇಕು ಕವನಗಳನ್ನು ವಾಚನ ಮಾಡಿದರು. ನಂತರ ವಾಚನ ಮಾಡಿದ ಕವಿತೆಗಳ ಕುರಿತು ಲಲಿತಾ ಭಾವಿಕಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ವೀರಣ್ಣ ಹುರಕಡ್ಲಿ, ಬಸವರಾಜ ಶೀಲವಂತರ, ಶರಣಪ್ಪ ಕೊತಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಬಸವರಾಜ ಚೌಡಕಿ, ವಂದನಾರ್ಪಣೆಯನ್ನು ಶಾಂತು ಬಡಿಗೇರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment
Click to see the code!
To insert emoticon you must added at least one space before the code.