ಕೊಪ್ಪಳ : ಛಾಯಾಚಿತ್ರ ಸ್ಪರ್ಧೆಯಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಖ್ಯಾತ ಛಾಯಾಚಿತ್ರಗಾರ ಪ್ರಕಾಶ ಕಂದಕೂರು ಅವರಿಗೆ ವಾರ್ತಾ ಇಲಾಖೆಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿದೆ. ಈ ಮೂಲಕ ಪ್ರಕಾಶ ಮುಕುಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಬಂದಂತೆ ಆಗಿದೆ.
ಕರ್ನಾಟಕ ಸರಕಾರ ವಾರ್ತಾ ಇಲಾಖೆಯ ಮೂಲಕ ನಡೆಸುವ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ೨೦೦೯-೧೦ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ಕಂದಕೂರ ಅವರಿಗೆ ಲಭಿಸಿದೆ. ಜೊತೆಗೆ ೨೫ ಸಾವಿರ ರೂಪಾಯಿ ನಗದು ಬಹುಮಾನವೂ ಬಂದಿದೆ.
ಪ್ರಕಾಶ ಕಂದಕೂರ ಅವರಿಗೆ ರಾಜ್ಯಮಟ್ಟದ ವಾರ್ತಾ ಇಲಾಖೆಯ ಪ್ರಶಸ್ತಿ ಬಂದಿರುವುದಕ್ಕೆ ಮಂಜುನಾಥ ಡೊಳ್ಳಿನ, ಬಸವರಾಜ ಪೂಜಾರ, ಸಿದ್ಲಿಂಗಪ್ಪ ಕೊಟ್ನೆಕಲ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.