ಕೊಪ್ಪಳ ಡಿ. : ಬಾಲ ನ್ಯಾಯ ಅಧಿನಿಯಮದನ್ವಯ ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಯನ್ನು ೦೩ ವರ್ಷಗಳ ಅವಧಿಗೆ ಪುನಾರಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೈ.ಬಿ. ಶಿಂಧೆ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರಾಗಿ ಎಂ. ರಾಜಶೇಖರ ಅವರನ್ನು ನೇಮಿಸಲಾಗಿದ್ದು, ಕಾಳಮ್ಮ ಪತ್ತಾರ, ನಿಲೋಫರ್ ರಾಂಪುರೆ, ಶೇಖರಗೌಡ ರಾಮತ್ನಾಳ ಮತ್ತು ಮಹಲಿಂಗಪ್ಪ ದೋಟಿಹಾಳ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಬಾಲನ್ಯಾಯ ಮಂಡಳಿಗೆ ಮೆಟ್ರೋ ಪಾಲಿಟಿನ್ ಮ್ಯಾಜಿಸ್ಟ್ರೇಟ್ ಅವರು ಅಧ್ಯಕ್ಷರಾಗಿದ್ದು, ಸದಸ್ಯರುಗಳಾಗಿ ಸಾವಿತ್ರಿ ಮುಜುಮದಾರ, ಕೆ. ವಸಂತಕುಮಾರ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.