ಕೊಪ್ಪಳ-17- ನಗರದ ಶ್ರೀಮತಿ ಶಾರದಮ್ಮ ವಿ ಕೊತಬಾಳ ಬಿ.ಬಿ.ಎಂ, ಬಿ.ಸಿ.ಎ ಹಾಗೂ ಬಿ.ಕಾಂ ಮಹಾವಿದ್ಯಾಲಯಲ್ಲಿ ಇತ್ತೀಚಿಗೆ ಹಿಂದಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಧ್ಯಾಪಕ ದಯಾನಂದ ಸಾಳಂಕಿ ದೀಪ ಬೆಳಗಿಸುದರ ಮೂಲಕ ಮಾತನಾಡಿ ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದ್ದು ತನ್ನದೇ ಆದ ಸ್ವಂತಿಕೆ ಹಾಗೂ ತತ್ವ ಸಿದ್ಧಾಂತವನ್ನು ಹೊಂದಿರುತ್ತದೆ. ಮಾತೃಭಾಷೆಯಂತೆ ಈ ಭಾಷೆಯನ್ನು ಗೌರವಿಸಬೇಕೆಂದು ಕರೆ ನೀಡಿದರು. ಜೊತೆಗೆ ಹಿಂದಿ ಸಾಹಿತ್ಯದ ಉಗಮ ವಿಕಾಸ ಕುರಿತು ಉಪನ್ಯಾಸ ನೀಡಿದರು. ಆಧ್ಯಕ್ಷತೆ ವಹಿಸಿ ಪ್ರಾಚಾರ್ಯ ರಾಜರಾಜೇಶ್ವರ ರಾವ್ ಮಾತನಾಡಿದರು. ವೇದಿಕೆಯಲ್ಲಿ ಆರ್.ವಿ ವಡಕಿ, ಪ್ರೊ ಸಿ.ವಿ ಕಲ್ಮಠ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಹಿಂದಿ ಉಪನ್ಯಾಸಕ ನಾಗರಾಜ ಮಠದ, ಸ್ವಾಗತ ಕುಮಾರಿ ಅಭಿಶ್ರೀ, ವಂದನಾರ್ಪಣೆ ಮೋಹನ ನೆರವೇರಿಸಿದರು.
Subscribe to:
Post Comments (Atom)
0 comments:
Post a Comment