ಕೊಪ್ಪಳ-17- ಹೈದ್ರಾಬಾದ್ ನವಾಬನ ಅರಸೊತ್ತಿಗೆಯಿಂದ ತತ್ತರಿಸಿ ಹೋಗಿದ್ದ ಈ ಪ್ರಾಂತಕ್ಕೆ ಸಪ್ಟಂಬರ್ ೧೭ ರಂದು ಸ್ವಾತಂತ್ರ ಪಡೆದುಕೊಂಡಿದ್ದು ಒಂದು ಐತಿಹಾಸಿಕ ಸುದಿನವಾಗಿದೆ. ಈ ಹೋರಾಟದಲ್ಲಿ ಮಡಿದು ಹೋದ ಹುತಾತ್ಮರಿಗೆ ನಾವು ಸ್ಮರಿಸಿ ಗೌರಿವಿಸುವ ಅಗತ್ಯವಿದೆ. ಎಷ್ಟೋ ತ್ಯಾಗ ಬಲಿದಾನಗಳಿಂದ ಬಂದಿರುವ ಈ ಸ್ವಾತಂತ್ರವನ್ನು ಉಳಿಸಿಸಿಕೊಂಡು ಹೋಗುವ ಅಗತ್ಯವಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿದರು. ಅವರು ಹೈ.ಕ ವಿಮೋಚನಾ ದಿನಾಚರಣೆಯ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಂದುವರೆದು ಅನೇಕ ಮಹಾ ಚೇತನಗಳ ಆದರ್ಶಗಳು ಯುವಕರಿಗೆ ಮಾದರಿಯಾಗಬೇಕು. ಭ್ರಷ್ಟಾಚಾರ ಈ ದೇಶದ ಪಿಡುಗು. ಭ್ರಷ್ಟಾಚಾರ ರಹಿತ ಆಡಳಿತದಿಂದ ಜನ ಸೇವೆ ಸಾಧ್ಯವೆಂದರು. ಉಪನ್ಯಾಸಕರಾದ ಸುರೇಶ ಸೊನ್ನದ, ಶೋಭಾ ಕೆ.ಎಸ್ ಹಾಗೂ ಅತಿಥಿ ಉಪನ್ಯಾಸಕ ವೃಂದ, ಶಿಕ್ಷಕೇತರ ಸಿಬ್ಭಂದಿ, ವಿದ್ಯಾರ್ಥಿ ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment