PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ೨೦ ನೇ ವಾರ್ಡಿನಲ್ಲಿ 




ಕೊಪ್ಪಳ.ಏ.೧೨: ಇಲ್ಲಿನ ನಗರದ ೨೦ ನೇ ವಾರ್ಡಿನಲ್ಲಿ ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ ಪರ ಬಿರುಸಿನ ಪ್ರಚಾರ ನಡೆಸಲಾಯಿತು.
ಸ್ಥಳೀಯ ಎಪಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್, ಜಿಲ್ಲಾ ಕಾಂಗ್ರೆಸ್ ಮುಖಂಡ ವೈಜನಾಥ ದಿವಟರ್ ಹಾಗೂ ಯುವ ನಾಯಕ ಪಂಪಾಪತಿ ಕೆಂಗಾರಿ, ಸೇರಿದಂತೆ ಅನೇಕ ಯುವ ಕಾರ್ಯಕರ್ತರೊಂದಿಗೆ ಇಲ್ಲಿ ೨೦ ನೇ ವಾರ್ಡಿನಲ್ಲಿ ಮನೆ ಮನೆಗೆ ತೇರಳಿ ಕಾಂಗ್ರೆಸ್ ಸರಕಾರದ ಕಾರ್ಯಸಾಧನೆಗಳು ಹಾಗೂ ಕ್ಷೇತ್ರದ ೧೦ ತಿಂಗಳ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿ ಹೇಳಿ ಪಕ್ಷದ ಅಭ್ಯರ್ಥಿ, ಅಭಿವೃದ್ಧಿಯ ನೇತಾರ ಕೆ. ಬಸವರಾಜ ಹಿಟ್ನಾಳ ರವರಿಗೆ ತಪ್ಪದೇ ಮತ ನೀಡಿ ಬಾರಿ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು. ಪ್ರತಿಯೊಬ್ಬರ ಮತವು ಮಹತ್ವವಾಗಿದ್ದು ತಪ್ಪದೇ ಕಾಂಗ್ರೆಸ್‌ಗೆ ಮತ ನೀಡುವಂತೆ ಅವರಿಲ್ಲಿ ಮನವಿ ಮಾಡಿದರು. 
ಈ ಸಂದರ್ಭದಲ್ಲಿ ವಾರ್ಡಿನ ಯುವಮುಖಂಡರಾದ ಅರುಣ ಶೇಟ್ಟಿ  ಪ್ರವೀಣ ಎಸ್.ಎಸ್., ಸಿದ್ದು ಶೆಳ್ಳಿ, ಅರುಣ ಬೋವಿಯರ್, ಮುಸ್ತಫಾ, ಯುನೀಸ್, ಫಾರುಖ್, ಯುಸೋಫ್, ಜಾವಿದ್, ಸಮೀರ್, ರೀಯಾಜ್ ಸೇರಿದಂತೆ ಅನೇಕ ಯುವಕರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top